ದೇವರಂತೆ ಬಂದು ಗರ್ಭಿಣಿಯ ಜೀವ ಉಳಿಸಿದ ಬಾಗಲಕೋಟೆಯ ಖಾಸಗಿ ವೈದ್ಯ | Oneindia Kannada

2017-11-03 2

Bagalkot: Private Hospital Doctor Strike, Dr Manohar of Kumareshwar private hospital saves a Pregnant, helps her give birth to a baby boy.


ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ಬಿಸಿ ಬಾಗಲಕೋಟೆಗೆ ಬಲವಾಗಿ ತಟ್ಟಿದೆ. ಇಂಥ ಸಂದರ್ಭದಲ್ಲಿ ನೆರವಿಗೆ ಬರ ಬೇಕಿದ್ದ ಸರ್ಕಾರಿ ವೈದ್ಯರು ಕೈ ಚೆಲ್ಲಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಪಾಲಿಗೆ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಮನೋಹರ್ ಅವರು ದೇವರಂತೆ ಬಂದು ರಕ್ಷಿಸಿದ್ದಾರೆ.ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದ ಗರ್ಭಿಣಿ ಚೈತ್ರಾ ಪವಾರ ಅವರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆ ವೈದ್ಯರು ನಿರಾಕರಿಸಿದ್ದಾರೆ. ಗರ್ಭಿಣಿ ಪರಿಸ್ಥಿತಿ ವಿಷಮವಾಗಿದ್ದು, ಉತ್ತಮ ಸೌಲಭ್ಯವುಳ್ಳ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. 108 ಆಂಬುಲೆನ್ಸ್ ನಲ್ಲಿ ಚೈತ್ರಾರನ್ನು ಕೊನೆಗೆಇಳಕಲ್ ನಗರದಲ್ಲಿ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತು.ಗರ್ಭದಲ್ಲಿದ್ದ ಮಗುವಿನ ಕಾಲು ಮುಂದೆಬಂದ ಸ್ಥಿತಿಯಲ್ಲಿ ನರಳಾಡುತ್ತಿದ್ದ ಗರ್ಭಿಣಿ ಚೈತ್ರಾರ ಚಿಕಿತ್ಸೆಗೆ ತಕ್ಷಣವೇ ಸಂಶೋಧನಾ ವಿದ್ಯಾರ್ಥಿಗಳು, ನರ್ಸ್ ಗಳು ಮುಂದಾಗಿದ್ದಾರೆ. ವಿಷಯ ತಿಳಿದ ಡಾ. ಮನೋಹರ್ ಅವರು ತಕ್ಷಣವೇ ಆಪರೇಷನ್ ಥೇಟರ್ ಗೆ ಧಾವಿಸಿ ಬಂದಿದ್ದಾರೆ. ನಾರ್ಮಲ್ ಹೆರಿಗೆಯಾಗಿದ್ದು, ಗಂಡು ಮಗು ಜನನವಾಗಿದೆ.

Free Traffic Exchange

Videos similaires